ಬೆಳಗಾವಿ: ವಕ್ಫ ಮಂಡಳಿ ಮೂಲಕ ‘ಕಾಂಗ್ರೆಸ್ ಸರ್ಕಾರವು ರೈತರ ಭೂಮಿ ಕಸಿದುಕೊಳ್ಳಲು ಸಂಚು ರೂಪಿಸಿದ್ದು, ಅದರ ವಿರುದ್ಧ ಒಂದಾಗಿ ಹೋರಾಟ ನಡೆಸಬೇಕಾಗಿದೆ ಎಂದು ಕೊಲ್ಹಾಪುರದ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಅವರಿಂದಿಲ್ಲಿ ಹೇಳಿದರು.
ನಗರದಲ್ಲಿಂದು ನಾಗರಿಕ ಹಿತರಕ್ಷಣಾ ಸಮಿತಿಯು ಏರ್ಪಡಿಸಿದ್ದ ‘ವಕ್ಫ್ ಹಟಾವೋ, ದೇಶ ಬಚಾವೋ’ ಆಂದೋಲನದಲ್ಲಿ ಮಾತನಾಡಿದ ಅವರು,
ಬ್ರಿಟಿಷರು ರೂಪಿಸಿದ ಈ ಕರಾಳ ಕಾಯ್ದೆಯು ಸಂದರ್ಭಕ್ಕೆ ತಕ್ಕಂತೆ ತಿದ್ದುಪಡಿಯಾಗಿದೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ರೈತರ ಭೂಮಿಗೆ ಈಗ ವಕ್ಫ್ ಮಂಡಳಿ ಹೆಸರು ಸೇರ್ಪಡೆಯಾಗುತ್ತಿದೆ. ಇದು ಸಾಂವಿಧಾನಿಕವಾದ ಕಾಯ್ದೆಯಲ್ಲ. ನಮ್ಮ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ನಾವು ಹೋರಾಡದಿದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಬಂದಿರುವ ಸ್ಥಿತಿ ನಮಗೂ ಬರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಉಗ್ರವಾದದ ಮೂಲಕ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಗೊಳಿಸಲು ಸಂಚು ನಡೆದಿದೆ. ಬೇರೆ ದೇಶಗಳ ಶತ್ರುಗಳು ನಮಗೆ ಅನ್ಯಾಯ ಮಾಡುತ್ತಿಲ್ಲ. ಬದಲಿಗೆ, ನಮ್ಮಲ್ಲಿ ಇರುವವರಿಂದಲೇ ಅನ್ಯಾಯ ನಡೆದಿದೆ. ನೀವು ಅಲ್ಪಸಂಖ್ಯಾತರಾಗಬೇಡಿ’ ಎಂದರು.
‘ನಮಗಾಗಿ ಸನಾತನ ಮಂಡಳಿ, ಸನಾತನ ಕಾನೂನು ಕಾಯ್ದೆ ರೂಪಿಸಿ’ ಎಂದೂ ಆಗ್ರಹಿಸಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಲಜಿಯ ಶಿವಾನಂದ ಗುರೂಜಿ, ಜಾಲಿಕೊಪ್ಪದ ಶಿವಾತ್ಮಾನಂದ ಸ್ವಾಮೀಜಿ, ಮುನವಳ್ಳಿಯ ಮುಕ್ತಾನಂದ ಸ್ವಾಮೀಜಿ, ಕಾರಂಜಿ ಮಠದ ಶಿವಯೋಗಿ ದೇವರು, ಶಿವಾಪುರದ ಮುಪ್ಪಿನ ಕಾಡಸಿದ್ಧೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.
ರೈತರ ಭೂಮಿ ಕಸಿದುಕೊಳ್ಳಲು ವಕ್ಫ ಮೂಲಕ ಸಂಚು: ಕಾಡಸಿದ್ದೇಶ್ವರ ಶ್ರೀ
