ಇಂದು ಶಿಕ್ಷಣದಲ್ಲಿ ಅಮೂಲಾಗ್ರವಾದ ಬದಲಾವಣೆಗಳಾಗುತ್ತಿವೆ. ಅದರಲ್ಲಿಯೂ ವೈದ್ಯವಿಜ್ಞಾನ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದ್ದು, ಅದಕ್ಕೆ ತಕ್ಕಂತೆ ಶಿಕ್ಷಕರೂ ಬದಲಾಗಬೇಕು. ಯುವ ಪೀಳಿಗೆಗೆ, ವಾಸ್ತವಕ್ಕೆ ಹತ್ತಿರವಿರುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಯುವವೈದ್ಯರು ತಂತ್ರಜ್ಞಾನದ ಮೂಲಕ ಶೀಘ್ರರೋಗಪತ್ತೆ ಮಾಡಿ ಅಗತ್ಯವಿರುವ ಚಿಕಿತ್ಸೆ ನೀಡಿ, ಮುನ್ನಚ್ಚರಿಕೆ ಕ್ರಮಕೈಗೊಳ್ಳಲು ತಿಳಿ ಹೇಳಬೇಕು ಎಂದು ಅಮೇರಿಕದ ನಾಶವಿಲ್ಲೆಯ ಛಪ್ಪೆ ಮತ್ತು ಎಲಬುಕೀಲು ಇನ್ಸಿಟಿಟ್ಯೂಟ್‌ನ ಡಾ. ಫಿಲಿಪ್ ಕ್ರೆಗರ ಅವರು ಸಲಹೆ ನೀಡಿದರು.
ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಅ್ಯಂಡ ರಿಸರ್ಚ ಹಾಗೂ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಎಲಬು ಕೀಲು ವಿಭಾಗವು ದಿ. 28 ಏಪ್ರೀಲ್ 2023ರಂದು ಏರ್ಪಡಿಸಿದ್ದ ಪೆಲ್ವಿಕ್ ಎಸೆಟಾಬುಲರ ಶಸ್ತçಚಿಕಿತ್ಸಕರ ಸಂಘದ 5ನೇ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದರು.

ಕಾಹೆರ ಉಪಕುಲಪತಿ ಡಾ. ನಿತಿನ ಗಂಗಾನೆ ಅವರು ಮಾತನಾಡಿ, ಯುವ ರೋಗಿಗಳು, ಮುನ್ನಚ್ಚರಿಕೆ ಔಷಧದ ಅಡ್ಡ ಪರಿಣಾಮದಿಂದ ಯುಜನತೆಯ ಮೇಲೆ ಆಗುವ ತೊಂದರೆಯನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅದರಲ್ಲಿಯೂ ಬೋನ್ ನೆಕ್ರೊಸಿಸ ಉಂಟಾಗಿ ಹಿಪ್(ಛಪ್ಪೆ) ಬದಲಾವಣೆ ಸಾಮಾನ್ಯವಾಗಿ ಕಂಡು ಬರುತ್ತಿವೆ. ಆದ್ದರಿಂದ ಶೀಘ್ರ ರೋಗಪತ್ತೆಯಿಂದ ಅದನ್ನು ತಪ್ಪಿಸಲು ಸಾಧ್ಯವಿದೆ. ರೋಗಿಗಳಲ್ಲಿ ಖಾಯಿಲೆಯನ್ನು ತಿರಸ್ಕರಿಸುವ ಮನೋಭಾವ ಹೆಚ್ಚಾಗಿದ್ದು ಅದನ್ನು ಹೋಗಲಾಡಿಸಿ, ಅಗತ್ಯ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗುವಂತೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

5 ವಿದೇಶಿ ಹಾಗೂ 20 ದೇಶೀಯ ಅತಿಥಿ ಉಪನ್ಯಾಸಕರು ಆಗಮಿಸಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಸಮಾವೇಶದಲ್ಲಿ ಸುಮಾರು 70ಕ್ಕೂ ಅಧಿಕ ಸಂಶೋಧನಾ ವರದಿಗಳನ್ನು ಮಂಡಿಸಲಾಯಿತು. ಈ ಸಂದರ್ಭದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ (ಕರ್ನಲ್) ದಯಾನಂದ, ಡಾ. ಪ್ರಣವ ಶಾ, ಡಾ. ಪ್ರದೀಪ ನೇಮಾಡೆ, ಡಾ. ರವಿ ಜತ್ತಿ ಉಪಸ್ಥಿತರಿದ್ದರು. ಡಾ. ದಿನೇಶ ಕಾಳೆ ಸ್ವಾಗತಿಸಿದರು. ಡಾ. ಸಾಹಿಲ್ ಕಾಳೆ ಹಾಗೂ ಉತ್ಕರ್ಷ ಬುರಲಿ ನಿರೂಪಿಸಿದರು.