ಬೆಳಗಾವಿ,:ಬೆಳಗಾವಿಯಲ್ಲಿ “National Institute of Food Technology Entrepreneurship & Management (NIFTEM)” ಸ್ಥಾಪಿಸುವಂತೆ ಒತ್ತಾಯಿಸಿ ಸಂಸದರಾದ ಜಗದೀಶ ಶೆಟ್ಟರ ಅವರು ನವ-ದೆಹಲಿಯಲ್ಲಿಂದು ಕೇಂದ್ರ ಆಹಾರ ಸಂಸ್ಕರಣಾ ಉಧ್ಯಮ ಸಚಿವರಾದ ಚಿರಾಗ ಪಾಸ್ವಾನ ಅವರನ್ನು ಭೇಟಿ ಮಾಡಿ ಮನವಿಯನ್ನು ಅರ್ಪಿಸಿದರು.
ಕರ್ನಾಟಕ ರಾಜ್ಯವು ಕೃಷಿ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದೆ. ವಿವಿಧ ಬೆಳೆಗಳಾದ ರಾಗಿ, ಗೋಧಿ, ಭತ್ತ, ದ್ವಿದಳ ಧಾನ್ಯಗಳು, ವಾಣಿಜ್ಯ ಬೆಳೆಗಳಾದ ಕಬ್ಬು, ತಂಬಾಕು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಬೆಳೆಯಲಾಗುವ ಮಸಾಲೆ ಪದಾರ್ಥಗಳಾದ ಕರಿ ಮೆಣಸು, ಏಲಕ್ಕಿ, ಶುಂಟಿ, ಬೆಳ್ಳೂಳ್ಳಿ ಸೇರಿದಂತೆ ಬೇರೆ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿದೆ
ಅದರಂತೆ, ಬೆಳಗಾವಿ ನಗರವು ಉದ್ಯಮ ಬೆಳವಣಿಗೆ ಕ್ಷೇತ್ರದಲ್ಲಿಯೂ ಸಾಕಷ್ಟು ಪ್ರಗತಿ ಸಾಧಿಸಿದೆ. ಹೈಡ್ರಾಲಿಕ್ಸ್ ಉದ್ಯಮ ಪ್ರಪ್ರಥಮವಾಗಿ ಬೆಳಗಾವಿಯಲ್ಲಿ ಸ್ಥಾಪನೆಗೊಂಡಿದೆ.
ನಗರವು ವ್ಯವಸ್ಥಿತವಾಗಿ ಎಲ್ಲ ಅನಕೂಲತೆ, ಅವಕಾಶಗಳು ಕಲ್ಪಿಸಿಕೊಡುವಲ್ಲಿ ಯಶಸ್ಸು ಸಾಧಿಸಿದೆ. ಬೆಳವಣಿಗೆ ರಂಗದಲ್ಲಿ ರಾಜ್ಯದ ಎರಡನೆಯ ರಾಜಧಾನಿಯಾಗಿ ಹೊರ ಹೊಮ್ಮಿದೆ. ಹೀಗಾಗಿ ಬೆಳಗಾವಿ ಕೃಷಿ, ಉದ್ಯಮ ಹಾಗೂ ವ್ಯಾಪಾರ ಕೇಂದ್ರವಾಗಿ ಪರಿಗಣಿಸಲ್ಪಡುತ್ತದೆ.
ಈ ಎಲ್ಲ ಅಂಶಗಳ ಬಗ್ಗೆ ಸಂಸದರಾದ ಜಗದೀಶ ಶೆಟ್ಟರ ಅವರು ಕೇಂದ್ರ ಸಚಿವರಲ್ಲಿ ಪ್ರಸ್ತಾಪಿಸಿ, ಬೆಳಗಾವಿ ನಗರದಲ್ಲಿ National Institute of Food Technology Entrepreneurship & Management (NIFTEM) ಸ್ಥಾಪನೆ ಮಾಡಿ, ರೈತರಿಗೆ, ಉದ್ಯಮದಾರರಿಗೆ, ಗ್ರಾಹಕರಿಗೆ, ಎಲ್ಲ ಮದ್ಯಸ್ಥಗಾರರಿಗೆ ಅನುಕೂಲತೆಯನ್ನು ಕಲ್ಪಸಿ ಕೊಡುವಂತೆ ಅವರು ವಿನಂತಿಸಿದರು.

ಬೆಳಗಾವಿಯಲ್ಲಿ National Institute of Food Technology Entrepreneurship & Management (NIFTEM) ಸ್ಥಾಪಿಸುವ ಬಗ್ಗೆ ಇಲ್ಲಿರುವ ಎಲ್ಲ ಅನುಕೂಲತೆ ಬಗ್ಗೆ ಅವಲೋಕಿಸಿ ಸ್ಥಾಪಿಸುವ ಭರವಸೆಯನ್ನು ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವರಾದ ಚಿರಾಗ ಪಾಸ್ವಾನ ಅವರಿಗೆ ನೀಡಿರುವುದಾಗಿ ಜಗದೀಶ ಶೆಟ್ಟರ ಅವರು ಪತ್ರಿಕಾ ಪ್ರಕಣೆಯಲ್ಲಿ ತಿಳಿಸಿದ್ದಾರೆ.