ಬೆಳಗಾವಿ : ನಗರದಲ್ಲಿ ಇತ್ತೀಚಿಗೆ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳನ್ನು ಪತ್ತೆ ಹಚ್ಚಲು ನಗರದ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚಿಸಲಾಗಿತ್ತು. ಸದಾ ಹದ್ದಿನ ಕಣ್ಣಿಡುತ್ತ ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಮಾಳ ಮಾರುತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂಲತಃ ಗುಲ್ಬಾರ್ಗಾ ನಿವಾಸಿಯಾದ ಸದ್ಯಕ್ಕೆ ಸೊಲ್ಲಾಫುರದಲ್ಲಿ ವಾಸಿಸುವ ನಾಗರಾಜ್ ಸುಭಾಷ್ ಕಚೇರಿ, ನವೀನ್ ಗರಕುಲ ಕುಂಬಾರಿ
ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಇವನು ತನ್ನ ಗೆಳೆಯರೊಂದಿಗೆ XUV 500 ಐಷಾರಾಮಿ ಕಾರಿನ ಮೇಲೆ *PRESS* ಅಂತ ಬರೆಯಿಸಿ, ಅದರಲ್ಲಿ ಬಂದು ಮಹಾಂತೇಶನಗರ ಆಂಜನೇಯ ನಗರ ಮತ್ತು ಶಿವಬಸವ ನಗರಗಳಲ್ಲಿ ಕಳ್ಳತನ ಮಾಡಿರುವದನ್ನು ಒಪ್ಪಿಕೊಂಡಿದ್ದಾರೆ. 10 ಲಕ್ಷ ಮೌಲ್ಯದ ಚಿನ್ನಾಭರಣ, ಸುಮಾರು 10 ಲಕ್ಷದ ಕಾರು ಸೇರಿದಂತೆ 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳ್ಳತನಕ್ಕೆ ಸಹಕರಿಸಿದ ಆರೋಪಿತರಾದ 1.ಹುಸೇನ್ @ ಸಾಗರ್ ಗಾಯಕ್ವಾಡ್ 2.ಅಮುಲ್ ಹಾಗೂ 3.ಕೇತ್ಯಾ ಎಂಬುವವರು ಪರಾರಿಯಾಗಿದ್ದಾರೆ. ಮುಂದುವರಿಸಲಾಗಿದೆ. ಅಂತರ್ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಮಾರ್ಕೆಟ್ ಎಸಿಪಿ ಸೋಮೇಗೌಡ ಯು. ಜಿ, ಪಿಐ ಕಾಲಿಮಿರ್ಚಿ ಇವರ ನೇತೃತ್ವದಲ್ಲಿ ಪಿಎಸ್ ಐ ಹೊನ್ನಪ್ಪ ತಳವಾರ, ಶ್ರೀಶೈಲ್ ಹುಳಗೇರಿ ಮತ್ತು ಸಿಬ್ಬಂದಿ ಎಂ ಜಿ ಕುರೇರ್, ಚಿನ್ನಪ್ಪಗೋಳ, ಬಸು ಬಸ್ತ, ಚಂದ್ರು ಚಿಗರಿ ಕೆ.ಬಿ. ಗೌರಾನಿ, ಹೊಸಮನಿ, ರವಿ ಬಾರಿಕರ್, ಮುಜಾವರ, ಶಿವಾಜಿ ಚೌಹಾನ, ಮಾರುತಿ ಮಾದರ, ಮಲ್ಲಿಕಾರ್ಜುನ್ ಗಾಡವಿ, ಜಗನ್ನಾಥ ಭೋಸ್ಲೆ, ಬಸವರಾಜ ಕಲ್ಲಪ್ಪನವರ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ರಮೇಶ್ ಅಕ್ಕಿ ಹಾಗೂ ಮಹಾದೇವ ಕಾಶಿದ ರವರ ತಂಡವನ್ನು ಪೊಲೀಸ್ ಆಯುಕ್ತರಾದ ಯೆಡಾ ಮಾಟಿನ್ ಮಾರ್ಬನ್ಯಾಂಗ್ ಹಾಗೂ ಡಿಸಿಪಿ ಅವರುಗಳು ಅಭಿನಂದಿಸಿದ್ದಾರೆ.
ಅಂತರಾಜ್ಯ ಕಳ್ಳನ ಬಂಧಿಸಿದ ಬೆಳಗಾವಿ ಪೊಲೀಸರು
