ಬೆಳಗಾವಿ : ಮಹಿಳೆಯ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ದಿ. 16 ರಂದು ಪ್ರೀತಿ ನಾರ್ವೇಕರ್ ರವರು ಎಪಿಎಂಸಿ ಹತ್ತಿರದ ಸಾಕರೆ ಕಿರಾಣಿ ಅಂಗಡಿ ಪಕ್ಕದಲ್ಲಿ ಸಾಯಂಕಾಲ 7.30ಕ್ಕೆ ನಡೆದುಕೊಂಡು ಹೋಗುವಾಗ ಅವರ ಹಿಂದಿನಿಂದ ಬಂದ ವ್ಯಕ್ತಿಯು ಕೊರಳಲ್ಲಿದ್ದ ಮಂಗಳ ಸೂತ್ರವನ್ನು ಕಿತ್ತುಕೊಂಡು ಹೋದ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆರೋಪಿತನ ಜಾಡು ಹಿಡಿದ ಎಪಿಎಂಸಿ ಪೊಲೀಸರು ಶಂಕಿತ ಆರೋಪಿತ ನಗರದ ಕಂಗ್ರಾಳ ಗಲ್ಲಿ ನಿವಾಸಿಯಾದ ಸೋಮೇಶ ಲಕ್ಷ್ಮಣ ಶಂಭುಚೆ (37) ಎಂಬುವನನ್ನು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿ, ರೂ.2,12,400/- ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ವಶ ಪಡಿಸಿಕೊಂಡು ಆರೋಪಿತನ ವಿರುದ್ಧ ಕ್ರಮ ಜರುಗಿಸಿ,ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಆರೋಪಿತನನ್ನು ಪತ್ತೆ ಮಾಡಿ ಪ್ರಕರಣ ಬೆಳಕಿಗೆ ತಂದ ಎಪಿಎಂಸಿ ಪಿಐ ಹಾಗೂ ಅವರ ತಂಡವನ್ನು ಪೋಲಿಸ್ ಆಯುಕ್ತರು ಹಾಗೂ ಡಿಸಿಪಿ ರವರುಗಳು ಅಭಿನಂದಿಸಿದ್ದಾರೆ.
ಎಪಿಎಂಸಿ ಪೊಲೀಸರಿಂದ ಸರಗಳ್ಳನ ಬಂಧನ
