ಬೆಳಗಾವಿಯ ಘನತ್ಯಾಜ್ಯವನ್ನು ವೈಜ್ಞಾನಿಕ ಹಾಗೂ ಸಮರ್ಪಕವಾಗಿ ನಿರ್ವಹಿಸಲು 135 ಕೋ.ರೂ.ಗಳ ಹೆಚ್ಚುವರಿ ಅನುದಾನವು ಕೇಂದ್ರ ಸರ್ಕಾರದಿಂದ ಲಭಿಸಿದೆ.
ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ ಅವರ ಉಪಸ್ಥಿತಿಯಲ್ಲಿ ರಾಜಸ್ಥಾನದ ಜೈಪುರದಲ್ಲಿ ಈಚೆಗೆ ನಡೆದ ಸಮಾವೇಶದಲ್ಲಿ ಬೆಳಗಾವಿ ನಗರದ ಘನತ್ಯಾಜ್ಯ ನಿರ್ವಹಣೆ (CITIIS 2.0 VIISWAS – Vision to Implement Integrated Solid Waste management and Sustainability) ಯೋಜನೆಯ ಚತುರ್ಭುಜ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕುವ ಮೂಲಕ ಬೆಳಗಾವಿ ನಗರಕ್ಕೆ ಈ ಅನುದಾನ ನೀಡಲು ಒಪ್ಪಗೆ ಸೂಚಿಸಲಾಯಿತು.
ಕೇಂದ್ರ ಸರಕಾರದ ಸ್ಮಾರ್ಟ್‌ಸಿಟಿ ಯೋಜನೆಗಳಿಗೆ CITIIS 2.0 ಸವಾಲ ಆಹ್ವಾನಿಸಲಾಗಿತ್ತು. ಅದರಲ್ಲಿ ದೇಶದ ಒಟ್ಟು 84 ನಗರಗಳು ಭಾಗಿಯಾಗಿದ್ದವು. ಬೆಳಗಾವಿ ಸ್ಮಾರ್ಟ್‌ಸಿಟಿ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಕರ್ಷಕ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಲಾಗಿತ್ತು.
2024 ರ ಮಾರ್ಚ್‌ನಲ್ಲಿ ಈ ಕುರಿತು ತೀರ್ಪುಗಾರ ತಂಡದ ಮುಂದೆ ಬೆಳಗಾವಿ ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕಿ
ಸೈಯದಾ ಆಫ್ರೀನ್ ಬಾನು ಬಳ್ಳಾರಿ ಅವರು ವಿಸ್ಕೃತ ಯೋಜನಾ ವರದಿಯನ್ನು ಪ್ರಸ್ತುತಪಡಿಸಿದ್ದರು. ಅಂತಿಮ ವಾಗಿ ಈ ಚಾಲೇಂಜಿನಲ್ಲಿ ದೇಶದ 18 ನಗರಗಳನ್ನು ಆಯ್ಕೆ ಮಾಡಲಾಗಿದೆ.ಅದರಲ್ಲಿ ಬೆಳಗಾವಿಯೂ ಒಂದಾಗಿದೆ. ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ನಗರ ಎಂಬುದು ವಿಶೇಷ.
ಈ ಪ್ರಯುಕ್ತ ರಾಜಸ್ಥಾನದ ಜೈಪುರದಲ್ಲಿ ನಡೆದ ಸಮಾವೇಶ ದಲ್ಲಿ ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯ, ರಾಜ್ಯ ಪ್ರತಿನಿಧಿ ಕೆಯುಐಡಿಎಫ್‌ಸಿ, ಬೆಳಗಾವಿ ಸ್ಮಾರ್ಟ್‌ಸಿಟಿ ಹಾಗೂ ಮಹಾ ನಗರ ಪಾಲಿಕೆ ನಡುವೆ ಚತುರ್ಭುಜ (Quadrilateral Agreement) ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ನಗರದ ವಿಭಿನ್ನವಾದ ಘನತ್ಯಾಜ್ಯ ಸಿದ್ಧಪಡಿಸಲಾಗಿದ್ದು ನಿರ್ವಹಣೆಗೆ ರೂಪುರೇಷೆ ಯೋಜನೆ ಅನುಷ್ಠಾನಕ್ಕೆ 3 ವರ್ಷಗಳ ಕಾಲಾವಧಿ ನಿಗದಿಪಡಿಸಲಾಗಿದೆ. ಇದಕ್ಕಾಗಿ ₹135 ಕೋಟಿ ಅನುದಾನ ಒದಗಿಸಲಾಗಿದೆ. ಮಾರ್ಚ್ -2028ಕ್ಕೆ ಮುಕ್ತಾಯವಾಗಲಿದೆ. ಯೋಜನೆ
ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಕೇಂದ್ರ ನಗರ ವ್ಯವಹಾರ ಗಳ ಲಾಖೆಯ ಆಯುಕ್ತ ರೂಪಾ ಮಿಶ್ರಾ,ಕರ್ನಾಟಕ ಮೂಲ ಸೌಲಭ್ಯ ಹಾಗೂ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶರತ್, ಬೆಳಗಾವಿ ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕಿ ಸೈಯದಾ ಆಫ್ರೀನ್ ಬಾನು ಬಳ್ಳಾರಿ, ಪಾಲಿಕೆ ಆಯುಕ್ತ ಶುಭಾ ಬಿ. ಇತರರು ಇದ್ದರು.