ಚಿಕ್ಕೋಡಿ,:ಪ್ರಭಾಕರ ಕೋರೆ ಅವರ ಒಡೆತನದ ಮಯೂರ ಚಿತ್ರಮಂದಿರದ ಸುವರ್ಣ ಸಂಭ್ರಮಾಚರಣೆ ಹಾಗೂ ಕೆಎಲ್ ಇ ಸಂಸ್ಥೆಯ ಎಸ್ ಸಿ ಪಾಟೀಲ ಕನ್ನಡ ಮಾದ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಹಿರಿಯ ನಟ ರವಿಚಂದ್ರನ್ ಅವರು ಅವರು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸಂತೋಷ ಎನ್ನುವದು ಇನ್ನೊಬ್ಬರ ಮುಖದಲ್ಲಿ ಕಂಡಾಗ ನಾವೂ ಕೂಡ ಸುಖಿಯಾಗಿರಲು ಸಾಧ್ಯ. ಆದ್ದರಿಂದಲೇ ಡಾ ಪ್ರಭಾಕರ ಕೋರೆ ಅವರು ಎಲ್ಲವನ್ನು ಸಾಧ್ಯವಾಗಿಸಿದ್ದಾರೆ. ಶಿಕ್ಷಣದ ಜೊತೆಗೆ ಬದುಕು ನೀಡಿ, ಅವರ ಬಾಳಿಗೆ ಬೆಳಕಾಗಿದ್ದಾರೆ. ಎಲ್ಲವೂ ಸಾಧ್ಯವಾದದ್ದು, ಕೋರೆ ಅವರು ಇನ್ನೊಬ್ಬರ ಮುಖದಲ್ಲಿ ನಗು ಕಂಡವರು. ಶಿಕ್ಷಣ, ಬದುಕು ನೀಡಿದ್ದಾರೆ. ನಮ್ಮ ಮನೆ ಪಕ್ಕ ಕೆಎಲ್ ಇ ಕಾಲೇಜು ಇದೆ. ಅತಿಥಿಗಳಿಗೆ ಪ್ರೀತಿ ಎಂದರೆ ಕೋರೆ ಅವರನ್ನು ನೋಡಿ ಕಲಿಬೇಕು. ಕನ್ನಡ ಹೋರಾಟಕ್ಕೆ ನಾವು ಸದಾ ಸಿದ್ದ. ಮನಸ್ಸು ಶುದ್ದವಾಗಿದ್ದರೆ ಎಲ್ಲವೂ ಸ್ವಚ್ಚವಾಗಿರುತ್ತದೆ. ಸಾಧನೆಗಳು ನಿರಂತರವಾಗಿರುತ್ತವೆ. ತಂದೆ ಸಮಾನರಾದ ಡಾ. ಕೋರೆ ಅವರ ಪ್ರೀತಿ ವಾತ್ಸಲ್ಯ ಹಾಗೂ ಅವರ ಸಾಧನೆ ಇಂದಿನ ಜನರಿಗೆ ಪ್ರೇರಣಾದಾಯಿ ಎಂದರು.
ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ ಅವರು ಮಾತನಾಡಿ, ಪುಟ್ಟ ಹಳ್ಳಿಯಲ್ಲಿ ಎಲ್ಲ ಸೌಲಭ್ಯವಿರುವದು ಅಪರೂಪ ಆದರೆ ಇಲ್ಲಿ ಎಲ್ಲವೂ ಇದೆ. ಹಳ್ಳಿಗಳನ್ನು ಉದ್ದಾರ ಮಾಡಿದರೆ ನಗರೀಕರಣವನ್ನು ತಡೆಗಟ್ಟಬಹುದು ಎಂಬುದಕ್ಕೆ ಅಂಕಲಿ ಗ್ರಾಮ ಒಳ್ಳೆಯ ಉದಾಹರಣೆ. ಪ್ರತಿಯೊಬ್ಬರು ಹುಟ್ಟಿದ ಹಾಗೂ ಕಲಿತ ಶಾಲೆಗೆ ಋಣಿಯಾಗಿರಬೇಕು ಅದರ ಅಭಿವೃದ್ದಿಗೆ ಕೈಜೋಡಿಸಬೇಕು ಎಂದರು. ಅವರು, ೨೦೦೭ ರಲ್ಲಿ ಬೆಳಗಾವಿಯಲ್ಲಿ ಮರೆಯಲಾರದ ಘಟನೆ ನನ್ನ ಜೀವನದಲ್ಲಿ ನಡೆದಿದೆ. ಆಗ ಕೋರೆಯವರು ಮಾತಾಡ ಮಾತಾಡ ಮಲ್ಲಿಗೆ ಚಿತ್ರದ ಯಶಸ್ವಿಗಾಗಿ ದೊಡ್ಡದಾದ ವಿಜಯೋತ್ಸವ ಮಾಡಿದ್ದರು ಎಂದು ಸ್ಮರಿಸಿದರು. ಮಾತಾಡ ಮಾತಾಡ ಮಲ್ಲಿಗೆ ವಿಜಯೋತ್ಸವ. ಲಕ್ಷ್ಮಿ & ಸರಸ್ವತಿ ಕೂಡಿರುವದು ಕಠಿಣ. ನಮ್ಮ ಊರುಗಳನ್ನೆ ಅಭಿವೃದ್ಧಿ ಮಾಡಿದರೆ ನಗರೀಕರಣ ತಡೆಯಬಹುದು.
ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುಟ್ಟ ಗ್ರಾಮ ಅಂಕಲಿಯ ಚಿತ್ರಣವನ್ನೇ ಕೆಎಲ್ ಇ ಸಂಸ್ಥೆ ಬದಲಾಯಿಸಿದೆ. 314 ಸಂಸ್ಥೆಗಳ ಮೂಲಕ 1.5 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಮೈಸೂರಿನ ನಾಡಿನವರಿಗೆ ರಾಜರ ಕೃಪೆಯಿಂದ ಎಲ್ಲ ವ್ಯವಸ್ಥೆ ಸಿಕ್ಕಿದೆ ಆದರೆ ಮುಂಬೈ ಪ್ರೆಸಿಡೆನ್ಸಿಯಲ್ಲಿ ಶಿಕ್ಷಣ ಪಡೆಯುವದು ದುರ್ಲಬವಾಗಿತ್ತು. 7 ಜನ ಶಿಕ್ಷಕರಿಂದ ಪ್ರಾರಂಭವಾದ ಸಂಸ್ಥೆ ಈ ಭಾಗದಲ್ಲಿ ಕನ್ನಡದ ಕಂಪು ಪಸರಿಸಿದೆ. ಮಲೇಶಿಯಾದ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣವನ್ನು ನೀಡುತ್ತಿದೆ. ಈ ಭಾಗದಲ್ಲಿ ಶಿಕ್ಷಣದ ಜೊತೆಗೆ ಆರೋಗ್ಯ ಕೊರತೆಯನ್ನು ನೀಗಿಸಲಾಗಿದೆ. ರೈತರೇ ಅಧಿಕವಿರುವ ಈ ಭಾಗದಲ್ಲಿ 2400 ಹಾಸಿಗೆಗಳ ಆಸ್ಪತ್ರೆಯನ್ನು ಪ್ರಾರಂಭಿಸಿ ಸೇವೆ ನೀಡಲಾಗುತ್ತಿದೆ. ಪಕ್ಷ ಬೇದ ಇಲ್ಲದೇ ಸಂಸ್ಥೆಯನ್ನು ಬೆಳೆಸಲಾಗುತ್ತಿದೆ. ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಮುಖ್ಯ ಕಾರಣ ಕೆಎಲ್ ಇ ಸಂಸ್ಥೆ ಎಂದ ಅವರು, ಇಂದು ಈ ಚಿತ್ರಮಂದಿರಕ್ಕೆ 50ನೇ ವರ್ಷದ ಸುವರ್ಣ ಸಂಭ್ರಮ ನಿಮಿತ್ತ ಎಲ್ಲ ಕಲಾವಿದ ದಿಗ್ಗಜರನ್ನು ಅಂಕಲಿ ಎಂಬ ಪುಟ್ಟ ಹಳ್ಳಿಗೆ ಕರೆಸಬೇಕು, ನಮ್ಮ ಚಿತ್ರರಂಗ, ಕಲಾರಂಗ ಯಾವಾಗಲೂ ಜೀವಂತವಾಗಿ ಉಳಿಯಬೇಕೆಂಬ ಹಂಬಲದಿಂದ ನಿರಂತರ ಕನ್ನಡ ಸೇವೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಎಲ್ಲ ಕಡೆ ಚಿತ್ರ ಮಂದಿರಗಳು ಮುಚ್ಚಿವೆ ಆದರೆ ಸಣ್ಣ ಹಳ್ಳಿಯಲ್ಲಿ ಇನ್ನೂ ಚಾಲನೆಯಲ್ಲಿದ್ದು, ಕನ್ನಡ ಉಳಿಯಲು ಕಂಕಣಬದ್ದವಾಗಿದೆ ಎಂದರು.
ನಟ ಡಾಲಿ ಧನಂಜಯ ಅವರು ಮಾತನಾಡಿ, ತುಂಬಾ ಪ್ರೀತಿ ಸಿಕ್ಕಾಗ ಮಾತೆ ಬರಲ್ಲ. ಕೆಎಲ್ ಇ ಗೊತ್ತುಇತ್ತು ಆದರೆ ಕನ್ನಡ ಉಳಿಯಲಿಕ್ಕೆ ಹೇಗೆ ಕಾರ್ಯ ಮಾಡಿದ್ದಾರೆ. ಕನ್ನಡಕ್ಕೆ ಆಧ್ಯತೆ ನೀಡಿರುವದು ನಮಗೆ ಬಹಳ ಖುಷಿಪಡಿಸಿದೆ. ಹಳ್ಳಿಗಳಲ್ಲಿ ಪಟ್ಟಣಗಳಲ್ಲಿ ಕುಟುಂಭಗಳು ಚಿತ್ರ ನೋಡಲು ಸಾಧ್ಯವಿಲ್ಲ. ಒಳ್ಳೆಯ ವ್ಯವಸ್ಥೆ ಕೊಟ್ಟರೆ ಕುಟುಂಬ ಸಮೇತ ನೋಡಬಹುದು. ಮಯೂರ ಚಿತ್ರ ಮಂದಿರ ಎಲ್ಲರಿಗೂ ಮಾದರಿ. ಒಂದೇ ಕಡೆ ಕಾರ್ಯನಿರ್ವಹಿಸುವದು ಬಹಳ ಕಠಿಣ. ಕನ್ನಡ ಕಲಾವಿದರ ಮೇಲೆ ನಿಮ್ಮ ಅಭಿಮಾನ ಹೀಗೆ ಇರಲಿ ಎಂದು ಕೋರಿದರು.
ಮಂಡ್ಯ ರಮೇಶ, ನಟಿಯರಾದ ಅನುಪ್ರಭಾಕರ, ಅಮೂಲ್ಯಾ, ಸಪ್ತಮಿ ಗೌಡಾ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ ಅವರು ವಹಿಸಿದ್ದರು. ವೇದಿಕೆ ಮೇಲೆ ಮುರುಗೇಶ ನಿರಾಣಿ, ಗಣೇಶ ಹುಕ್ಕೇರಿ, ಧುರ್ಯೋಧನ ಐಹೊಳೆ, ಸಂಸ್ಥೆಯ ಕಾರ್ಯದರ್ಶಿ ಬಿ ಜಿ ದೇಸಾಯಿ, ಜಯಣ್ಣ (ರಾಜು) ಮುನವಳ್ಳಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಯೂರ ಚಿತ್ರಮಂದಿರದ ಮಾಲಕರಾದ ಆಶಾ ಪ್ರಭಾಕರ ಕೋರೆ, ಪ್ರೀತಿ ದೊಡವಾಡ, ಕೆಎಲ್ಇ ಸಂಸ್ಥೆ, ಚಿದಾನಂದ ಬಸವಪ್ರಭು ಕೋರೆ ಸಕ್ಕರೆ ಕಾರಖಾನೆ, ಶಿವಶಕ್ತಿ ಶುಗರ್ಸ, ಡಾ. ಪ್ರಭಾಕರ ಕೋರೆ ಸಹಕಾರ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮಹೇಶ ಗುರನಗೌಡರ ನಿರೂಪಿಸಿದರು. ಸಂಗೀತ ನಿರ್ದೇಶಕರು ಹಾಗೂ ಹಿನ್ನಲೆ ಗಾಯಕರಾದ ವಿಜಯ ಪ್ರಕಾಶ ಅವರು ಕನ್ನಡದ ವಿವಿಧ ಹಾಡುಗಳನ್ನು ಹಾಡುವದರ ಮೂಲಕ ನೆರೆದಿದ್ದ ಜನರನ್ನು ಮನರಂಜಿಸಿದರು.ಹಳೆಯ ಹಾಡುಗಳಿಗೆ ಜೀವ ತುಂಬಿ ಹಾಡಿದಾಗ ಯುವ ಜನರು ಕುಣಿದು ಕುಪ್ಪಳಿಸಿದರು.
ವಚನ ಗಾಯಣದ ಮೂಲಕ ಆದ್ಯಾತ್ಮಿಕತೆಗೆ ಕರೆದುಕೊಂಡು ಹೋದರು
ಇನ್ನೊಬ್ಬರ ಮುಖದಲ್ಲಿ ಸಂತೋಷ ಕಂಡಾಗ ನಾವು ಸುಖಿ : ರವಿಚಂದ್ರನ್
