ಬೆಳಗಾವಿ :ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡ ಭಾಷೆ ಉಳಿಸುವ ಬೆಳೆಸುವ ಕಾರ್ಯವಾಗಬೇಕಿದೆ. ವೈದ್ಯ ಸಾಹಿತ್ಯವೂ ಹೆಚ್ಚಾಗಿ ಪ್ರಚಲಿತದಲ್ಲಿ ಬರಬೇಕು̤ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ಕನ್ನಡ ಲೇಖಕರಿಗೆ, ಪ್ರಕಾಶಕರಿಗೆ, ಸಮಾಜ ಸೇವಕರಿಗೆ ಪ್ರಶಸ್ತಿಗಳನ್ನು ನೀಡುವುದರ ಮೂಲಕ ಪ್ರೋತ್ಸಾಹಿಸುತ್ತ ಬಂದಿದೆ ಎಂದು ಖ್ಯಾತ ಹೃದಯರೋಗ ತಜ್ಞ ಡಾ. ಮಹಾದೇವ ಡಿ. ದೀಕ್ಷಿತ ಹೇಳಿದರು.

ರವಿವಾರ ಹಿಂದವಾಡಿಯ ಐ.ಎಂ.ಇ.ಆರ್ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು 2022 ಮತ್ತು 2023  ನೇ ಸಾಲಿನ ಸಿರಿಗನ್ನಡ ಹಾಗೂ 2021 ಮತ್ತು 2022 ನೇ ಸಾಲಿನ ಪುಸ್ತಕ, ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಗಡಿಭಾಗದ ಬೆಳಗಾವಿಯಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಅನೇಕ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವೈದ್ಯಕೀಯ ಕ್ಷೇತ್ರ ಬಹಳ ವಿಶಾಲವಾಗಿದೆ. ಎಷ್ಟು ಆಳವಾಗಿ ಅಧ್ಯಯನ ಮಾಡಿದರೂ ಕೂಡ ಕಡಿಮೆ. ಆದ್ದರಿಂದ ವೈದ್ಯರು ಸಾಹಿತ್ಯದ ಕಡೆಗೆ ಗಮನ ಹರಿಸುವದು ಸ್ವಲ್ಪ ಕಡಿಮೆ. ಈಗಿನ ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಸಾಧ್ಯವಾಗಿಸಿದೆ ಎಂದ ಅವರು, ನನಗೆ ಹೃದಯ ಶಸ್ತ್ರಕ್ರಿಯೆ ಮಾಡುವುದಕ್ಕಿಂತ ಭಾಷಣ ಮಾಡುವುದು ಕಷ್ಟ ಎಂದು ತಿಳಿಸಿದರು.

ಲೇಖಕ, ಬಿ. ಆರ್. ಪೊಲೀಸ್ ಪಾಟೀಲ ಮಾತನಾಡಿ, ಬರೆದಂತೆ ಬದುಕುವ ಧರ್ಮವನ್ನು ನಾವು ಕಲಿಯಬೇಕಾದದ್ದು ಜನಪದರಿಂದ, ಶರಣರಿಂದ, ವಚನದಿಂದ. ನಮಗೆ ದೇಸಿ ಕಾವ್ಯದಲ್ಲಿ ಅದ್ಭುತವಾದ ರಚನೆಗಳು ಸಿಗುತ್ತವೆ ಎಂದರು.

ಸಂಧ್ಯಾ ಹುನಗುಂಟೇಕರ ಮಾತನಾಡಿದರು. 2023 ಸಿರಿಗನ್ನಡ ಗೌರವ ಪಡೆದ ಪ್ರೊ. ವಿ. ಎನ್.ಗೋಡಖಿಂಡಿ, ಪ್ರೊ. ರಾಜಶೇಖರ ಕರಡಿಗುದ್ದಿ ಸೇರಿದಂತೆ 2021- 23 ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಪಡೆದಿರುವ  ಡಾ. ಸಿ. ಕೆ. ನಾವಲಗಿ, ಡಾ. ಬಸವರಾಜ ಜಗಜಂಪಿ, ಬಿ. ಎಸ್. ಜಗಾಪುರ, ಡಾ. ಜೆ.ಪಿ. ದೊಡ್ಡಮನಿ, ಬಸವಣ್ಣೆಪ್ಪ ಕಂಬಾರ, ಡಾ. ಬಸು ಬೇವಿನಗಿಡದ, ಶೋಭಾ ನಾಯಿಕ, ರಂಜನಾ ನಾಯಕ, ಅಶೋಕ ಮಳಗಲಿ, ಡಾ. ಆರ್. ಬಿ. ಚಿಲುಮಿ, ಅಪ್ಪಾಸಾಹೇಬ ಸದರ ಜೋಶಿ, ದೀಪಿಕಾ ಚಾಟೆ, ಪ್ರಿಯಾ ಪುರಾಣಿಕ, ಹಮೀದಾ ಬೇಗಮ್ ದೇಸಾಯಿ, ಅನುಪಮಾ ಚೌಗಲೆ, ಪಂ. ರಾಜಪ್ರಭು ದೋತ್ರೆ, ಸುನಂದಾ ಮುಳೆ, ಬಸವರಾಜ ಗಾರ್ಗಿ, ಎ.ಎ. ಸನದಿ, ಸುನಂದಾ ಹಾಲಬಾವಿ, ಡಾ. ಪಿ.ಜಿ. ಕೆಂಪಣ್ಣವರ, ನೀರಜಾ ಗಣಾಚಾರಿ, ಯ. ರು. ಪಾಟೀಲ, ಶಮಾ ಜಮಾದಾರ, ಸ, ರಾ, ಸುಳಕೂಡೆ, ಸುಮಾ ಕಾಟ್ಕರ್, ಬಿ. ಎಸ್. ಗವಿಮಠ, ಶೀಲಾ ಅಂಕೋಲಾ, ಶೈಲಜಾ ಭಿಂಗೆ, ಬಾಳೇಶ ಚಿನಗುಡಿ, ಕಿತ್ತೂರಿನ ರಾಜಗುರು ಸಂಸ್ಥಾನಮಠ, ಮುಕುಂದ ಗೋರೆ ಹಾಗೂ ಸ್ಪರ್ಧೆಯ ವಿಜೇತರನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಎಸ್. ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನೀರಜಾ ಗಣಾಚಾರಿ ಸ್ವಾಗತಿಸಿದರು. ಶಿರೀಷ ಜೋಶಿ ಪರಿಚಯಿಸಿದರು. ಭಾರತಿ ವಡವಿ, ಸ್ವಾತಿ ಘೋಡೆಕರ ನಿರೂಪಿಸಿದರು. ಎನ್. ಬಿ. ದೇಶಪಾಂಡೆ,  ಶ್ರೀಧರ ಹುಕ್ಕೇರಿ, ಸಂಜೀವ ಕುಲಕರ್ಣಿ, ಮೋಹನ ಗುಂಡ್ಲೂರ, ನಾರಾಯಣ ಗಣಾಚಾರಿ, ರಾಧಿಕಾ ನಾಯಿಕ, ಪ್ರೊ. ಪಿ. ಜಿ. ಕೆಂಪಣ್ಣವರ, ಎಚ್. ಎಸ್. ದೇಶಪಾಂಡೆ, ಗುಂಡೇನಟ್ಟಿ ಮಧುಕರ ಉಪಸ್ಥಿತರಿದ್ದರು.