ಕರ್ನಾಟಕ ವಿಧಾನಸಭೆಗೆ ಕಳೆದ ದಿ. ೧೦ ಮೇ ೨೦೨೩ ಮತದಾನ ನಡೆದಿದ್ದು, ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 158 ರ ಪ್ರಕಾರ ಒಂದು  ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು 10,000/- ರೂ.ಗಳನ್ನು (ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಯ   ಠೇವಣಿ ಕೇವಲ ಅರ್ಧದಷ್ಟು ಇರುತ್ತದೆ.) ಭದ್ರತಾ ಠೇವಣಿಯನ್ನಾಗಿ ಇಟ್ಟುಕೊಳ್ಳುತ್ತದೆ. ನಿಯಮಗಳ ಪ್ರಕಾರ – “ಮತದಾನದ ಒಟ್ಟು ಮತಗಳ 1/6 ಕ್ಕಿಂತ ಕಡಿಮೆ ಮತಗಳನ್ನು ಪಡೆದ ಯಾವುದೇ ಅಭ್ಯರ್ಥಿಯ ಭದ್ರತಾ ಠೇವಣಿಯನ್ನು ಆಯೋಗವು ಜಪ್ತಿ ಮಾಡಿಕೊಳ್ಳುತ್ತದೆ. ಇದು ಸೇವಾ ಹಾಗೂ ಮನೆಯಿಂದ ಮಾಡಲಾದ ಮತದಾನದ ಮತವನ್ನು ಸಹ ಒಳಗೊಂಡಿರುತ್ತದೆ.

ಶೇ. ಮತದಾನದ ಒಟ್ಟು ಮತದಾರರ ನಿಜವಾದ ಮತಗಳು ಠೇವಣಿ ಮುಟ್ಟುಗೋಲು ತಪ್ಪಿಸಲು ಅಗತ್ಯವಿರುವ ಕನಿಷ್ಠ ಮತಗಳು

ಕ್ರ ಸಂ.ಕ್ಷೇತ್ರಶೇಕಡಾವಾರುಒಟ್ಟು ಮತಗಳುಚಲಾವಣೆಯಾದ ಮತಗಳುಅಭ್ಯರ್ಥಿ ಪಡೆಯಬೇಕಾದ ಮತಗಳು
1ಬೆಳಗಾವಿ ಉತ್ತರ59.5324852514933824890
2ಬೆಳಗಾವಿ ದಕ್ಷಿಣ63.424532415778826298
3ಬೆಳಗಾವಿ ಗ್ರಾಮೀಣ78.725367820324133874

ಆದ್ದರಿಂದ ಅಭ್ಯರ್ಥಿಯು ತನ್ನ ಠೇವಣಿ ಉಳಿಸಿಕೊಳ್ಳಲು ಆಯೋಗವು ಸೂಚಿಸಿದ ಕನಿಷ್ಠ ಮತಗಳನ್ನು ಪಡೆಯಲೇಬೇಕಾಗುತ್ತದೆ. ಅದರಂತೆ ಬೆಳಗಾವಿ ಉತ್ತರದಲ್ಲಿ ಕನಿಷ್ಠ 24,890, ದಕ್ಷಿಣದಲ್ಲಿ 26,298 ಮತ್ತು ಗ್ರಾಮೀಣ ಕ್ಷೇತ್ರದಲ್ಲಿ 33,874 ಮತಗಳನ್ನು ಪಡೆಯಬೇಕೆಂಬುದು ಸ್ಪಷ್ಟ.

ಕ್ರ ಸಂ.ಕ್ಷೇತ್ರಚಲಾವಣೆಯಾದ ಮತಗಳುಅಭ್ಯರ್ಥಿ ಪಡೆಯಬೇಕಾದ ಮತಗಳು
4ನಿಪ್ಪಾಣಿ  18731731220
5ಚಿಕ್ಕೋಡಿ-ಸದಲಗಾ182530               30422
6ಅಥಣಿ190910               31818
7ಕಾಗವಾಡ16088926815
8ಕುಡಚಿ14890824818
9ರಾಯಬಾಗ16427327379
10ಹುಕ್ಕೇರಿ16718327864
11ಅರಭಾವಿ18974931625
12ಗೋಕಾಕ18865331442
13ಯಮಕನಮರಡಿ16593227655
14ಖಾನಾಪೂರ16009326682
15ಕಿತ್ತೂರ15497725830
16ಬೈಲಹೊಂಗಲ15065425109
17ಸವದತ್ತಿ ಯಲ್ಲಮ್ಮ16182726971
18ರಾಮದುರ್ಗ15310625518

ಠೇವಣಿಯನ್ನು ಮರುಪಾವತಿಸಿದಾಗ –

ಅಭ್ಯರ್ಥಿಯು ಸೋಲಿಸಲ್ಪಟ್ಟರೂ ಕೂಡ ಮಾನ್ಯವಾದ ಅಂಚೆ ಮತಗಳನ್ನು ಒಳಗೊಂಡಂತೆ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮಾನ್ಯವಾದ ಮತಗಳ ಆರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಪಡೆಯಬೇಕು.

(i) ಅಭ್ಯರ್ಥಿಯು ತಮ್ಮ ನಿಧಿಗೆ ಅರ್ಹರಾಗಲು ಒಟ್ಟಾರೆಯಾಗಿ ಕ್ಷೇತ್ರದಲ್ಲಿ ಪಡೆದ ಒಟ್ಟು ಮಾನ್ಯವಾದ ಮತಗಳಲ್ಲಿ ಆರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಪಡೆದಿರಬೇಕು.

(ii) ಅಭ್ಯರ್ಥಿಯು ಚಲಾವಣೆಯಾದ ಮಾನ್ಯವಾದ ಮತಗಳ ಸಂಖ್ಯೆಯಲ್ಲಿ ನಿಖರವಾಗಿ ಆರನೇ ಒಂದು ಭಾಗವನ್ನು ಪಡೆಯದಿದ್ದರೆ, ಠೇವಣಿ ಹಣವನ್ನು ಹಿಂತಿರುಗಿಸಲಾಗುವುದಿಲ್ಲ.

(iii) ಅಭ್ಯರ್ಥಿಯು ಚುನಾಯಿತರಾಗಿದ್ದರೆ, ಅವರು ಮಾನ್ಯವಾದ ಮತಗಳ ಆರನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಗಳಿಸದಿದ್ದರೂ ಸಹ ಠೇವಣಿ ಮರುಪಾವತಿಸಲಾಗುವುದು.

ಚುನಾವಣೆಗೆ ಸ್ಫರ್ಧಿಸಿದ ಎಷ್ಟು ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಉಳಿಸಿಕೊಳ್ಳುತ್ತಾರೆ ಎಂಬುವದು ದಿ. 13 ರಂದು ಸ್ಪಷ್ಟವಾಗಿ ಗೊತ್ತಾಗಲಿದೆ.