ಬೆಂಗಳೂರು : ರಾಜ್ಯ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಎಲ್ಲ ಸಚಿವರಿಗೆ ಇಂದು ಎರಡನೇ ಸುತ್ತಿನಲ್ಲಿ 24 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೇ ಅವರಿಗೆ ಖಾತೆಯನ್ನು ಕೂಡ ಹಂಚಿಕೆ ಮಾಡಲಾಗಿದೆ. ಸರಕಾರದ ವಿವಿಧ ಇಲಾಖೆಗಳ ಸಚಿವರಾಗಿ ಹುದ್ದೆಯನ್ನು ಅಲಂಕರಿಸಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕಳೆದ ವಾರ ಅಧಿಕಾರ ಸ್ವೀಕರಿಸದ್ದರು. ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ , ಎಂ ಬಿ ಪಾಟೀಲ, ಸತೀಶ ಜಾರಕಿಹೊಳಿ ಅವರು ಸೇರಿದಂತೆ 8 ಜನ ಶಾಸಕರು ಸಂಪುಟ ದರಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಉಳಿದ 24 ಜನ ಸಚಿವರ ಅಧಿಕಾರ ಹಸ್ತಾಂತರ ಮುಂದೂಡಲಾಗಿತ್ತು. ಇಂದು ಸಂಪುಟದ ಎಲ್ಲ ಸಚಿವರು ಪ್ರಮಾಣವಚನ ಸ್ವೀಕರಿಸಿದರು.
ಸಚಿವರಿಗೆ ಯಾರಿಗೆ ಯಾವ ಖಾತೆ :
ಸಿದ್ದರಾಮಯ್ಯ – ಸಿಎಂ
ಡಿ.ಕೆ ಶಿವಕುಮಾರ್ – ಡಿಸಿಎಂ – ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ
ಡಾ. ಜಿ ಪರಮೇಶ್ವರ – ಗೃಹ
ಹೆಚ್.ಕೆ ಪಾಟೀಲ್ – ಕಾನೂನು & ಸಂಸದೀಯ ವ್ಯವಹಾರ
ಕೆ.ಜೆ ಜಾರ್ಜ – ಇಂದನ
ಎಂ.ಬಿ ಪಾಟೀಲ್ – ಬೃಹತ್ ಕೈಗಾರಿಕೆ
ರಾಮಲಿಂಗಾರೆಡ್ಡಿ – ಸಾರಿಗೆ
ಸತೀಶ್ ಜಾರಕಿಹೊಳಿ – ಲೋಕೋಪಯೋಗಿ
ಪ್ರಿಯಾಂಕ ಖರ್ಗೆ – ಗ್ರಾಮೀಣಾಭಿವೃದ್ಧಿ – ಪಂಚಾಯತ್ ರಾಜ್
ಜಮೀರ್ ಅಹಮದಾಬಾದ್ ಖಾನ್ – ವಸತಿ / ವಕ್ಫ್
ಕೃಷ್ಣಭೈರೇಗೌಡ – ಕಂದಾಯ
ದಿನೇಶ್ ಗುಂಡೂರಾವ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಚಲುವರಾಯಸ್ವಾಮಿ – ಕೃಷಿ
ಕೆ.ವೆಂಕಟೇಶ – ಪಶುಸಂಗೋಪನೆ ಹಾಗೂ ರೇಷ್ಮೆ
ಹೆಚ್ ಸಿ ಮಹಾದೇವಪ್ಪ – ಸಮಾಜಕಲ್ಯಾಣ
ಈಶ್ವರ ಖಂಡ್ರೆ – ಅರಣ್ಯ ಮತ್ತು ಪರಿಸರ
ಕೆ.ಎನ್ ರಾಜಣ್ಣ – ಸಹಕಾರ
ಶರಣಬಸಪ್ಪ ದರ್ಶನಾಪೂರ – ಸಣ್ಣ ಮತ್ತು ಸಾರ್ವಜನಿಕ ಕೈಗಾರಿಕೆ
ಶಿವಾನಂದ ಪಾಟೀಲ್ – ಸಕ್ಕರೆ ಮತ್ತು ಜವಳಿ
ಆರ್.ಬಿ ತಿಮ್ಮಾಪುರ – ಅಬಕಾರಿ & ಜವಳಿ
ಎಸ್ ಎಸ್ ಮಲ್ಲಿಕಾರ್ಜುನ – ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ
ಶಿವರಾಜ್ ತಂಗಡಗಿ – ಹಿಂದುಳಿದ ವರ್ಗ & ಎಸ್ಟಿ ಕಲ್ಯಾಣ
ಶರಣಪ್ರಕಾಶ ಪಾಟೀಲ್ – ಉನ್ನತ ಶಿಕ್ಷಣ ಖಾತೆ
ಮಂಕಾಳ ವೈದ್ಯ – ಮೀನುಗಾರಿಗೆ, ಬಂದರು ಮತ್ತು ಒಳನಾಡು
ಲಕ್ಷ್ಮೀ ಹೆಬ್ಬಾಳ್ಕರ್ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಡಿ ಸುಧಾಕರ – ಯೋಜನೆ ಮತ್ತು ಸಾಂಖ್ಯಿಕ
ಸಂತೋಷ ಲಾಡ್ – ಕಾರ್ಮಿಕ ಮತ್ತು ಕೌಶಾಲ್ಯಾಭಿವೃದ್ಧಿ
ಎನ್ ಎಸ್ ಬೋಸರಾಜು – ಪ್ರವಾಸೋದ್ಯಮ ಮತ್ತು ವಿಜ್ಞಾನ
ಬೈರತಿ ಸುರೇಶ್ – ನಗರಾಭಿವೃದ್ಧಿ
ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ ಖಾತೆ
ಎಂ.ಸಿ ಸುಧಾಕರ – ವೈದ್ಯಕೀಯ ಶಿಕ್ಷಣ
ಬಿ. ನಾಗೇಂದ್ರ – ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವಜನ ಮತ್ತು ಕ್ರೀಡಾ